ರೈತರಿಗೆ ಬಂತು ಬಂಪರ್ ಸುದ್ದಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಜಮೆಗೆ ದಿನಾಂಕ ನಿಗಧಿ (PM Kisan Yojana)
PM Kisan ಯೋಜನೆಯು ದೇಶದ ರೈತರ ಖಾತೆಗೆ ರೂ.2000 ಜಮೆ ಮಾಡುವ ಯೋಜನೆಯಾಗಿದ್ದು 23ನೇ ಕಂತಿನ ಹಣವನ್ನು ಅತಿ ಶೀಘ್ರದಲ್ಲಿ ಜಮಾ ಮಾಡಲಾಗುವುದೆಂದು ಹೇಳಲಾಗಿದೆ ಆದುದರಿಂದ ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣವು ಯಾವಾಗ ಬರುತ್ತದೆ ಹಾಗೂ ಹಣವು ಯಶಸ್ವಿಯಾಗಿ ನಿಮ್ಮ ಖಾತೆಗೆ ಕ್ಷಮೆಯಾಗಲು ಮಾಡಬೇಕಾದ ಅತಿ ಮುಖ್ಯವಾದ ಕೆಲಸಗಳನ್ನು ಎನ್ನುವ ಮಾಹಿತಿ ಇಲ್ಲಿದೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಇದನ್ನು ಓದಿ.
ಕೇಂದ್ರ ಸರ್ಕಾರದ ರೈತರ ಹಿತವನ್ನು ಕಾಪಾಡುವ ಹಾಗೂ ಆರ್ಥಿಕ ಸಬಲರನ್ನಾಗಿ ಮಾಡುವ ಮಹತ್ವಕಾಂಕ್ಷೆಯನ್ನು ಹೊಂದಿರುವ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ PM Kisan Yojana 23ನೇ ಕಂತಿನ ಹಣದ ಬಗ್ಗೆ ಭಾರಿ ಚರ್ಚೆ ಶುರುವಾಗಿದ್ದು ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದ್ದು ವರ್ಷಕ್ಕೆ ಆರು ಸಾವಿರದಂತೆ ಸಹಾಯಧನವನ್ನು ರೈತರಿಗೆ ನೀಡಲಾಗುತ್ತಿದೆ ಈಗಾಗಲೇ ಭಾರತ ಸರ್ಕಾರದ PM Kisan ಯೋಜನೆಯ 22 ಕಂತುಗಳನ್ನು ಯಶಸ್ವಿಯಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣವನ್ನು ಜಮೆ ಮಾಡಲಾಗಿದ್ದು ಈಗ 23ನೇ ಕಂತಿನ ಸರದಿ ಬಂದಿದೆ 2026ನೇ ವರ್ಷದ ಜುಲೈ ತಿಂಗಳಲ್ಲಿ ರೈತರ ಬ್ಯಾಂಕ್ ಅಕೌಂಟ್ ಗೆ ಹಣ ಬರುವ ಸಾಧ್ಯತೆ ಹೆಚ್ಚಾಗಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಅನ್ನದಾತ ರೈತರಿಗೆ ಇದು ದೊಡ್ಡ ಸುದ್ದಿಯಾಗಿದೆ.

PM Kisan Yojana ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರ ಕುಟುಂಬಗಳಿಗೆ ಪ್ರತಿವರ್ಷಕ್ಕೆ 6000ಗಳನ್ನು ನೀಡುತ್ತದೆ ಇದನ್ನು ಒಟ್ಟಿಗೆ ನೀಡುವ ಬದಲು ಎರಡು ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಡಿಪಿಟಿ ಮೂಲಕ ಹಣವನ್ನು ಜಮೀನು ಮಾಡಲಾಗುತ್ತದೆ ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಕೈಗೆ ಹಣ ಸೇರಲಿದ್ದು ಇದು ವ್ಯವಸಾಯ ಪ್ರಕ್ರಿಯೆಯಲ್ಲಿ ಬೀಜದ ಖರೀದಿ ರಸಗೊಬ್ಬರದ ಖರೀದಿ ಹಾಗೂ ಕೀಟನಾಶಕಗಳ ಖರೀದಿಯಲ್ಲಿ ತುಂಬಾ ಸಹಕಾರಿಯಾಗುತ್ತದೆ.
ಭಾರತ ಸರ್ಕಾರದ ಕೇಂದ್ರ ಯೋಜನೆ ಯಾದ PM Kisan Yojana ಯೋಜನೆಯು ರೈತರಿಗೆ ಆರ್ಥಿಕ ಸಹಾಯಧನವನ್ನು ನೀಡುತ್ತಿದ್ದು ಈಗಾಗಲೇ 22 ಕಂತುಗಳನ್ನು ಡಿಬಿಟಿ ಮೂಲಕ ಜಮೆ ಮಾಡಿದ್ದು 23ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ ಸರಕಾರದ ಮಾಹಿತಿಯ ಪ್ರಕಾರ ಹಿಂದಿನ 22ನೇ ಕಂತನ್ನು ಮಾರ್ಚ್ 13 2026ರಂದು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿತ್ತು ಅದರಂತೆ ಪ್ರತಿ ಕಂತಿನ ನಡುವೆ ನಾಲ್ಕು ತಿಂಗಳ ಅಂತರ ಇರಬೇಕಾಗಿರುವುದರಿಂದ ಮುಂದಿನ 23ನೇ ಕಂತಿನ ಹಣವು 2026 ನೇ ವರ್ಷದ ಜುಲೈ ತಿಂಗಳಲ್ಲಿ ಪಾವತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಧಿಕೃತ ದಿನಾಂಕ ಯೋಜನೆಯ ಅಂಶಗಳಲ್ಲಿ ನಾಲ್ಕು ತಿಂಗಳ ಅಂತರ ಎಂದು ನಮೂದಾಗಿರುವುದರಿಂದ ಜುಲೈ ತಿಂಗಳಲ್ಲಿ ಹಣ ಬರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತದೆ.

PM Kisan Yojana ಹಣವು ನಿಮ್ಮ ಖಾತೆಯನ್ನು ಯಶಸ್ವಿಯಾಗಿ ತಲುಪಬೇಕೆಂದರೆ ಮೊದಲು ನೀವು ಇ – ಕೆ ವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು ಈ ಕೆವೈಸಿ ಪ್ರಕ್ರಿಯೆಯು ಕೇವಲ ಒಂದು ಸಾಮಾನ್ಯ ಪ್ರಕ್ರಿಯೆ ಯಾಗಿರದೆ ಅರ್ಹರ ರೈತರನ್ನು ಗುರುತಿಸಲು ಸರ್ಕಾರ ಹಮ್ಮಿಕೊಂಡಿರುವ ಪರಿಣಾಮಕಾರಿ ಕ್ರಮವಾಗಿದೆ ಒಂದು ವೇಳೆ ನಿಮ್ಮ ಇ – ಕೆ ವೈಸಿ ಬಾಕಿ ಇದ್ದಲ್ಲಿ ತಕ್ಷಣವೇ PM Kisan Yojana ಪೋರ್ಟಲ್ ಗೆ ಭೇಟಿ ನೀಡಿ ಇ – ಕೆ ವೈಸಿ ಯನ್ನು ಅಪ್ಡೇಟ್ ಮಾಡತಕ್ಕದ್ದು ಅಥವಾ ಹತ್ತಿರದ ಸಿ ಎಸ್ ಸಿ ಸೆಂಟರ್ ಗೆ ಭೇಟಿ ನೀಡುವ ಮೂಲಕ PM Kisan Yojana ಇ – ಕೆ ವೈಸಿ ಯನ್ನು ಅಪ್ಡೇಟ್ ಮಾಡಿಸಬಹುದಾಗಿರುತ್ತದೆ.

ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇರುವ ಪ್ರಮುಖ ಮತ್ತೊಂದು ನಿಯಮವೆಂದರೆ ಭೂ ಪರಿಶೀಲನೆಯಾಗಿದೆ ರೈತರು ತಮ್ಮ ತಮ್ಮ ಹೆಸರಿನಲ್ಲಿರುವ ಜಮೀನಿನ ದಾಖಲೆಗಳನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ನಮೂದಿಸಬೇಕು ಹಾಗೂ ದಾಖಲೆಗಳು ಪಿಎಮ್ ಕಿಸನ್ ಡೇಟಾಬೇಸ್ ನಲ್ಲಿ ಸರಿಯಾಗಿ ಒಂದು ಒಂತಿರಬೇಕು ಭೂ ದಾಖಲೆಗಳ ಮಾಹಿತಿಯು ನಮೂದಾಗಿರದಿದ್ದಲ್ಲಿ ಅಥವಾ ಅಪ್ಡೇಟ್ ಸರಿಯಾಗಿ ಆಗಿಲ್ಲದಿದ್ದರೆ ನಿಮ್ಮ ಹೆಸರನ್ನು ಅರ್ಹ ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದುದರಿಂದ ಈಗಲೇ ಟಿಎಂ ಕಿಸಾನ್ ಪೋರ್ಟಲ್ ಗೆ ಲಾಗಿನ್ ಆಗಿ ನಿಮ್ಮ ಭೂಪರಿಶೀಲನೆ ಹಾಗೂ ಡಾಟಾಬೇಸ್ ನಲ್ಲಿ ಹೆಸರು ಮತ್ತು ಭೂಮಿಯ ದಾಖಲಾತಿಗಳನ್ನು ಪರಿಶೀಲಿಸಿ.
PM Kisan Yojana ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಹಾಗೂ ವರ್ಗಾವಣೆಗೊಳ್ಳುತ್ತಿರುವ ಹಣದ ಬ್ಯಾಂಕ್ ಖಾತೆಯು ಸಕ್ರಿಯವಾಗಿದೆಯೇ ಹಾಗೂ ಜಮೆಗೊಳ್ಳುತ್ತಿರುವ ಹಾಗೂ ಜಮೆಗೊಳ್ಳಬಹುದಾದ ಹಣದ ವರ್ಗಾವಣೆ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿರುತ್ತದೆ ಲಾಗಿನ್ ಆದ ನಂತರ ಬೆನೆಫಿಶಿಯರಿ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವುದರ ಮೂಲಕ ಹಾಗೂ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ ಓಟಿಪಿ ನಮೂದಿಸುವ ಮೂಲಕ ಅಥವಾ ಆಧಾರ್ ನಂಬರನ್ನು ನೀಡಿ ಓಟಿಪಿಯನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಇವರಿಗೆ ಬಂದಿರುವ ಹಣ ವರ್ಗಾವಣೆಗೊಳ್ಳುವ ಹಣ ಅಥವಾ ಬ್ಯಾಂಕ್ ಖಾತೆಯಲ್ಲಿ ಅಥವಾ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕೆವೈಸಿಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಅಥವಾ ನಿಮ್ಮ ಖಾತೆಗೆ ಹಣ ಏಕೆ ಬಂದಿಲ್ಲ ಮತ್ತು ಯಾವಾಗ ಬರುತ್ತದೆ ಎಂಬ ಪೂರ್ಣ ವಿವರವೂ ನೀವು ಈ ಪೋರ್ಟಲ್ ನಲ್ಲಿ ಪಡೆಯಬಹುದಾಗಿರುತ್ತದೆ.
PM Kisan Yojana ಯ ಅಧಿಕೃತ ವೆಬ್ ಸೈಟ್: PM Kisan Yojana
PM Kisan Yojana ಗೆ ಹೊಸದಾಗಿ ನೋದಾಯಿಸಲು (ಈ ಹಿಂದೆ ನೋಂದಾಯಿಸದಿದ್ದಲ್ಲಿ) : ಇಲ್ಲಿ ಕ್ಲಿಕ್ ಮಾಡಿ
ಬೆನಿಫಿಷಿಯರಿ ಸ್ಟೇಟಸ್ ತಿಳಿಯಲು : ಇಲ್ಲಿ ಕ್ಲಿಕ್ ಮಾಡಿ
PM Kisan Yojana ಮೊಬೈಲ್ ನಂಬರ್ ಅಪ್ಡೇಟ್ ಮಾಡಲು (ಹಳೆಯ ಮೊಬೈಲ್ ನಂಬರ್ ಕಳೆದು ಹೋಗಿದ್ದಲ್ಲಿ) : ಇಲ್ಲಿ ಕ್ಲಿಕ್ ಮಾಡಿ
PM Kisan Yojana ನೋಂದಣಿ ಸಂಖ್ಯೆಯನ್ನು ತಿಳಿಯಲು (ನೋಂದಣಿ ಸಂಖ್ಯೆಯನ್ನು ಮರೆತಿದ್ದಲ್ಲಿ) : ಇಲ್ಲಿ ಕ್ಲಿಕ್ ಮಾಡಿ
PM Kisan Yojana ಯೋಜನೆಯ 23ನೇ ಕಂತಿನ ಹಣವು ಜುಲೈ ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಿರುವುದರಿಂದ ರೈತರಿಗೆ ಬೇಸಿಗೆಯ ಬೆಳಗಳಿಗೆ ಹಾಗೂ ನಿರ್ವಹಣೆಗೆ ತುಂಬಾ ಅನುಕೂಲಕರವಾಗಲಿದೆ ಇಂದಿನ ದಿನಗಳಲ್ಲಿ ಕೃಷಿ ವೆಚ್ಚಗಳು ಯಂತ್ರೋಪಕರಣಗಳು ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆಗಳು ಏರುತ್ತಿರುವುದರಿಂದ ಈ ಸಮಯದಲ್ಲಿ ಕೇಂದ್ರ ಸರ್ಕಾರವು 2000 ಸಹಾಯಧನವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಶಕ್ತಿಯಂತೆ ಒದಗಿಸುತ್ತಿದೆ ಹೀಗಾಗಿ ಭಾರತ ಸರ್ಕಾರವು ಆದಷ್ಟು ಬೇಗ ಹಣ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದು ಜುಲೈ ತಿಂಗಳಲ್ಲಿ 23ನೇ ಕಂತಿನ ಹಣದ ಜಮಾವಳಿ ಖಚಿತವಾಗಿದೆ.
PM Kisan Yojana ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ಹಣದ ಜಮಾವಳಿಯು ಡಿಬಿಟಿ ಮೂಲಕವೇ ಆಗುತ್ತದೆ ಆದುದರಿಂದ ಬಹಳಷ್ಟು ರೈತರಿಗೆ ಬ್ಯಾಂಕ್ ಅಕೌಂಟ್ ನಂಬರ್ ಜೊತೆಗೆ ಆಧಾರ್ ನಂಬರ್ ಲಿಂಕ್ ಆಗದ ಕಾರಣ ಹಣ ಜಮಾವಳಿ ಆಗಿರುವುದಿಲ್ಲ ಹಾಗೂ ಭೂ ದಾಖಲೆಗಳು ಹೊಂದಿಕೆಯಾಗಿಲ್ಲದಿರುವುದರಿಂದ ಹಣವು ಬರದೇ ಇರಬಹುದು ಹಾಗಾಗಿ ತಮ್ಮ ಪೋರ್ಟಗೆ ಲಾಗಿನ್ ಆಗುವ ಮೂಲಕ ಆಗಿರುವ ತಪ್ಪುಗಳನ್ನು ಅಥವಾ ಬದಲಾವಣೆಗಳನ್ನು ತಕ್ಷಣವೇ ಅಪ್ಡೇಟ್ ಮಾಡಿಕೊಳ್ಳಿ ನಿಮ್ಮ ಬ್ಯಾಂಕ್ ಅಕೌಂಟ್ ಖಾತೆಯ ಡಿಬಿಟಿ ಸೌಲಭ್ಯವು ಸಕ್ರಿಯವಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸಹ ಅತಿ ಮುಖ್ಯವಾಗಿದೆ ಡಿಬಿಟಿ ಲಿಂಕ್ ಆಗದೆ ಇದ್ದಲ್ಲಿ ಸರ್ಕಾರವು ಹಣ ಬಿಡುಗಡೆಗೊಳಿಸಿದರು ಆ ಹಣವು ನಿಮ್ಮ ಖಾತೆಯನ್ನು ಸೇರುವುದಿಲ್ಲ ಎಂಬುದು ತಿಳಿದಿರಲಿ.
ಈ ವರ್ಷದ ಜುಲೈ ತಿಂಗಳಲ್ಲಿ ರೈತರ ಖಾತೆಗೆ 23ನೇ ಕಂತಿನ ಹಣವು ಬರುವುದು ಖಚಿತ ಎನ್ನಲಾಗಿದೆ ಆದ್ದರಿಂದ ಇ – ಕೆ ವೈಸಿ ಯನ್ನು ಹಾಗೂ ಭೂ ದಾಖಲೆಗಳ ನಮೂದು ಹಾಗೂ ಪರಿಶೀಲನೆಗಳ ಕೆಲಸವನ್ನು ಆದಷ್ಟು ಬೇಗ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ರೈತರ ಅಭಿವೃದ್ಧಿಗಾಗಿ ಇರುವ ಕೇಂದ್ರ ಸರ್ಕಾರದ ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಅರ್ಹ ರೈತರು ಪಡೆದುಕೊಳ್ಳಲಿ ಎಂಬುದು ಈ ಯೋಜನೆಯ ಉದ್ದೇಶವಾಗಿದೆ.
ಈ ಕೆಳಗಿನ ಉನ್ನತ ಆರ್ಥಿಕ ಸ್ಥಿತಿಯ ಫಲಾನುಭವಿಗಳ ವರ್ಗಗಳು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
- ಎಲ್ಲಾ ಸಾಂಸ್ಥಿಕ ಭೂಮಾಲೀಕರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ
- ಈ ಕೆಳಗಿನ ಒಂದು ಅಥವಾ ಹೆಚ್ಚಿನ ವರ್ಗಗಳಿಗೆ ಸೇರಿದ ರೈತ ಕುಟುಂಬಗಳು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ
- ಸಾಂವಿಧಾನಿಕ ಹುದ್ದೆಗಳ ಹಿಂದಿನ ಮತ್ತು ಪ್ರಸ್ತುತ ಹೊಂದಿರುವವರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
- ಮಾಜಿ ಮತ್ತು ಪ್ರಸ್ತುತ ಸಚಿವರು/ರಾಜ್ಯ ಸಚಿವರು ಮತ್ತು ಲೋಕಸಭೆ/ರಾಜ್ಯಸಭೆ/ರಾಜ್ಯ ವಿಧಾನಸಭೆಗಳು/ರಾಜ್ಯ ವಿಧಾನ ಪರಿಷತ್ತುಗಳ ಮಾಜಿ/ಪ್ರಸ್ತುತ ಸದಸ್ಯರು, ನಗರಸಭೆಗಳ ಮಾಜಿ ಮತ್ತು ಪ್ರಸ್ತುತ ಮೇಯರ್ಗಳು, ಜಿಲ್ಲಾ ಪಂಚಾಯಿತಿಗಳ ಮಾಜಿ ಮತ್ತು ಪ್ರಸ್ತುತ ಅಧ್ಯಕ್ಷರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
- ಕೇಂದ್ರ/ರಾಜ್ಯ ಸರ್ಕಾರಿ ಸಚಿವಾಲಯಗಳು/ಕಚೇರಿಗಳು/ಇಲಾಖೆಗಳು ಮತ್ತು ಅದರ ಕ್ಷೇತ್ರ ಘಟಕಗಳ ಕೇಂದ್ರ ಅಥವಾ ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸರ್ಕಾರದ ಅಡಿಯಲ್ಲಿ ಲಗತ್ತಿಸಲಾದ ಕಚೇರಿಗಳು/ಸ್ವಾಯತ್ತ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಿಯಮಿತ ನೌಕರರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
(ಬಹು ಕಾರ್ಯ ಸಿಬ್ಬಂದಿ/ವರ್ಗ IV/ಗುಂಪು D ನೌಕರರನ್ನು ಹೊರತುಪಡಿಸಿ) ಎಲ್ಲಾ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ನೌಕರರು.
- ಮೇಲಿನ ವರ್ಗದ ಎಲ್ಲಾ ನಿವೃತ್ತಿ ಹೊಂದಿದ/ನಿವೃತ್ತಿ ಹೊಂದಿದ ಪಿಂಚಣಿದಾರರು, ಮಾಸಿಕ ಪಿಂಚಣಿ ರೂ.10,000/- ಅಥವಾ ಅದಕ್ಕಿಂತ ಹೆಚ್ಚು (ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ / ವರ್ಗ IV/ಗುಂಪು ಡಿ ನೌಕರರನ್ನು ಹೊರತುಪಡಿಸಿ)
- ಕಳೆದ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ ಎಲ್ಲಾ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
- ವೈದ್ಯರು, ಎಂಜಿನಿಯರ್ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ವಾಸ್ತುಶಿಲ್ಪಿಗಳಂತಹ ವೃತ್ತಿಪರರು ವೃತ್ತಿಪರ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಅಭ್ಯಾಸಗಳನ್ನು ಕೈಗೊಳ್ಳುವ ಮೂಲಕ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ.
ಇದೇ ರೀತಿಯ ಎಲ್ಲ ಮಾಹಿತಿಯನ್ನು ನಾವು ನಮ್ಮ ಪುಟದಲ್ಲಿ ಹಾಕುತ್ತೇವೆ ಆದುದರಿಂದ ನಮ್ಮ ಈ ಪುಟವನ್ನು ಫಾಲೋ ಮಾಡುವುದರ ಮೂಲಕ ದೈನಂದಿನ ಮಾಹಿತಿಯನ್ನು ಪಡೆಯಿರಿ.
Read More: Schemes
Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.
Free Catalyst Scholarship 2026: 100% ಫೀಸ್ ಉಚಿತ + ಹಾಸ್ಟೆಲ್ + ಇಂಟರ್ನ್ಶಿಪ್ | ತಕ್ಷಣ ಅರ್ಜಿ ಹಾಕಿ
AHIDF Scheme 2026: ಪಶುಸಂಗೋಪನೆ ಯೋಜನೆ, 90% ಸಾಲ + 3% ಬಡ್ಡಿ ಸಬ್ಸಿಡಿ! ರೈತರು, ಉದ್ಯಮಿಗಳಿಗೆ ದೊಡ್ಡ ಅವಕಾಶ
She Mart Yojane 2026: ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ – ಸಾಲ, ತರಬೇತಿ, ಮಾರ್ಕೆಟ್ ಸೌಲಭ್ಯ!